top of page
  • Writer's pictureDoubleClickMedia

ಪೋಷಕರಿಗೆ ದೂರು ನೀಡಿದಕ್ಕೆ ಉಪನ್ಯಾಸಕರಿಗೆ ಮಚ್ಚು ತೋರಿಸಿದ ವಿದ್ಯಾರ್ಥಿ​


mandya student

ಮಂಡ್ಯ, ಆಗಸ್ಟ್‌ 25: ಉಪನ್ಯಾಸಕರೊಬ್ಬರು ಪೋಷಕರಿಗೆ ಕಂಪ್ಲೆಂಟ್​ ಹೇಳಿದಕ್ಕೆ ವಿದ್ಯಾರ್ಥಿಯೋರ್ವ ಮಚ್ಚು ತೋರಿಸಿ ದರ್ಪ ತೋರಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.



ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ, ಉಪನ್ಯಾಸಕರಿಗೆ ಲಾಂಗ್ ತೋರಿಸಿದ್ದಾನೆ. ಉದಯ್ ಗೌಡ (18) ಎನ್ನುವ ವಿದ್ಯಾರ್ಥಿ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತ ತರಗತಿಗೆ ಬರುತ್ತಿರಲ್ಲವಂತೆ. ಹೀಗಾಗಿ ಉಪನ್ಯಾಸಕ ಚಂದನ್, ಉದಯ್​ ಕ್ಲಾಸ್​ಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ಹೇಳಿದ್ದಾರೆ. ಇದರಿಂದ ಕೆರಳಿದ ಉದಯ್ ಗೌಡ ಲಾಂಗ್ ತೋರಿಸಿ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಘಟನೆಯ ವಿಡಿಯೋ ವಿದ್ಯಾರ್ಥಗಳ ಮೊಬೈಲ್​ನಲ್ಲಿ ಸೆರೆಯಾಗಿದೆ. ಅತ್ತ ಉಪನ್ಯಾಸಕರೂ ವಿದ್ಯಾರ್ಥಿ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ಉದಯ್​ಗೌಡ ಪೋಷಕರೊಂದಿಗೆ ಬಂದು ಕ್ಷಮೆಯಾಚಿಸಿದ್ದಾನೆ.



Comments


bottom of page